ಮಲೆನಾಡಿನ ಹಸಿರು ಸಿರಿಯ ಮಧ್ಯೆದಲ್ಲಿ 'ಕಮ್ಮತ್ತಳ್ಳಿ' ಎಂಬ ಚಿಕ್ಕ ಹಳ್ಳಿ. ಅಲ್ಲಿ ರಂಗಪ್ಪ ಮತ್ತು ಗೌರಮ್ಮ ದಂಪತಿಗಳ ಸುಂದರ ಕುಟುಂಬ. ಅವರಿಗೆ ಆರು ಜನ ಮಕ್ಕಳ. ನಾಲ್ಕು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳು. ರಂಗಪ್ಪನವರಿಗೆ ಹಿರಿಯರಿಂದ ಬಂದಿದ್ದ ಸ್ವಲ್ಪ ಹೊಲ ಇತ್ತು. ಅದರಲ್ಲಿ ಹಗಲಿರುಳು ಬೆವರಿನ ಹನಿ ಸುರಿಸಿ, ಬೇಸಾಯ ಮಾಡಿ ಅತ್ಯಂತ ಗೌರವದಿಂದ ಬದುಕುತ್ತಿದ್ದರು. ಅಪ್ಪ - ಅಮ್ಮನಿಗೆ ತಮ್ಮ ಮಕ್ಕಳೆಲ್ಲರೂ ಒಳ್ಳೆಯ ಶಿಕ್ಷಣ ಪಡೆದು, ಸಮಾಜದಲ್ಲಿ ದೊಡ್ಡ ವ್ಯಕ್ತಿಗಳು ಆಗಬೇಕೆಂಬ ಹಂಬಲವಿತ್ತು. ಆದರೆ, ಅವರ ಆರು ಜನ ಮಕ್ಕಳಲ್ಲಿ ಐವರು ಮಕ್ಕಳು, ರಂಗಪ್ಪ-ಗೌರಮ್ಮನ ಆಸೆಯಂತೆ ಓದಿನಲ್ಲಿ ಯಾವಾಗಲೂ ಮುಂದಿದ್ದರು. ಆದರೆ ಮೂರನೇಯ ಮಗ ಶಿವು ಮಾತ್ರ ಪೂರ್ತಿ ಭಿನ್ನ. ರಂಗಪ್ಪ ಮತ್ತು ಗೌರಮ್ಮ ಶಿವುನನ್ನು ಶಾಲೆಗೆ ಕಳುಹಿಸಲು ಪಟ್ಟಂತಹ ಪಾಡು ಅಷ್ಟಿಷ್ಟಲ್ಲ. ಊರಿನ ಶಿಕ್ಷಕರೇ ಖುದ್ದಾಗಿ ಮನೆಗೆ ಬಂದು ಕರೆದುಕೊಂಡು ಹೋದರೂ, ಶಿವು ಹೇಗೋ ತಪ್ಪಿಸಿಕೊಂಡು ಬಂದು ಕೊಟ್ಟಿಗೆಯಲ್ಲೋ ಅಥವಾ ತೋಟದ ಮೂಲೆಯಲ್ಲೋ ಅಡಗಿ ಕುಳಿತು ಬಿಡುತ್ತಿದ್ದನು. ಒಂದು ದಿವಸ ರಂಗಪ್ಪ ಶಿವುನನ್ನು ಮನೆ ಹಜಾರದ ಕಂಬಕ್ಕೆ ಕಟ್ಟಿಹಾಕಿ, "ಯಾಕೋ ಶಾಲೆಗೆ ಹೋಗ್ತೋದಿಲ್ಲ? ಶಾಲೆಗೆ ಹೋಗಿ ಓದೋಕೆ, ಬರೆಯೋಕೆ ಏನೋ ನಿನಗೆ ದೊಡ್ಡ ರೋಗ?" ಎಂದು ಕೂಗಾಡಿದರು. ಶಿವು ಅಳುತ್ತಲೇ, "ಅಪ್ಪಾ, ನನಗೆ ಮೇಷ್ಟ್ರು ಹೇಳೋದು, ಬರೆಯೋದು ಏನು ಗೊತ್ತಾಗಲ್ಲಪ್ಪ. ನಾನು ಸಾಲೆಗೆ...
'ಮಣ್ಣಿನ ಸೊಗಡು, ಮನದ ಮಾತು'