ಮಲೆನಾಡಿನ ಹಸಿರು ಸಿರಿಯ ಮಧ್ಯೆದಲ್ಲಿ 'ಕಮ್ಮತ್ತಳ್ಳಿ' ಎಂಬ ಚಿಕ್ಕ ಹಳ್ಳಿ. ಅಲ್ಲಿ ರಂಗಪ್ಪ ಮತ್ತು ಗೌರಮ್ಮ ದಂಪತಿಗಳ ಸುಂದರ ಕುಟುಂಬ. ಅವರಿಗೆ ಆರು ಜನ ಮಕ್ಕಳ. ನಾಲ್ಕು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳು. ರಂಗಪ್ಪನವರಿಗೆ ಹಿರಿಯರಿಂದ ಬಂದಿದ್ದ ಸ್ವಲ್ಪ ಹೊಲ ಇತ್ತು. ಅದರಲ್ಲಿ ಹಗಲಿರುಳು ಬೆವರಿನ ಹನಿ ಸುರಿಸಿ, ಬೇಸಾಯ ಮಾಡಿ ಅತ್ಯಂತ ಗೌರವದಿಂದ ಬದುಕುತ್ತಿದ್ದರು. ಅಪ್ಪ - ಅಮ್ಮನಿಗೆ ತಮ್ಮ ಮಕ್ಕಳೆಲ್ಲರೂ ಒಳ್ಳೆಯ ಶಿಕ್ಷಣ ಪಡೆದು, ಸಮಾಜದಲ್ಲಿ ದೊಡ್ಡ ವ್ಯಕ್ತಿಗಳು ಆಗಬೇಕೆಂಬ ಹಂಬಲವಿತ್ತು. ಆದರೆ, ಅವರ ಆರು ಜನ ಮಕ್ಕಳಲ್ಲಿ ಐವರು ಮಕ್ಕಳು, ರಂಗಪ್ಪ-ಗೌರಮ್ಮನ ಆಸೆಯಂತೆ ಓದಿನಲ್ಲಿ ಯಾವಾಗಲೂ ಮುಂದಿದ್ದರು. ಆದರೆ ಮೂರನೇಯ ಮಗ ಶಿವು ಮಾತ್ರ ಪೂರ್ತಿ ಭಿನ್ನ. ರಂಗಪ್ಪ ಮತ್ತು ಗೌರಮ್ಮ ಶಿವುನನ್ನು ಶಾಲೆಗೆ ಕಳುಹಿಸಲು ಪಟ್ಟಂತಹ ಪಾಡು ಅಷ್ಟಿಷ್ಟಲ್ಲ. ಊರಿನ ಶಿಕ್ಷಕರೇ ಖುದ್ದಾಗಿ ಮನೆಗೆ ಬಂದು ಕರೆದುಕೊಂಡು ಹೋದರೂ, ಶಿವು ಹೇಗೋ ತಪ್ಪಿಸಿಕೊಂಡು ಬಂದು ಕೊಟ್ಟಿಗೆಯಲ್ಲೋ ಅಥವಾ ತೋಟದ ಮೂಲೆಯಲ್ಲೋ ಅಡಗಿ ಕುಳಿತು ಬಿಡುತ್ತಿದ್ದನು. ಒಂದು ದಿವಸ ರಂಗಪ್ಪ ಶಿವುನನ್ನು ಮನೆ ಹಜಾರದ ಕಂಬಕ್ಕೆ ಕಟ್ಟಿಹಾಕಿ, "ಯಾಕೋ ಶಾಲೆಗೆ ಹೋಗ್ತೋದಿಲ್ಲ? ಶಾಲೆಗೆ ಹೋಗಿ ಓದೋಕೆ, ಬರೆಯೋಕೆ ಏನೋ ನಿನಗೆ ದೊಡ್ಡ ರೋಗ?" ಎಂದು ಕೂಗಾಡಿದರು. ಶಿವು ಅಳುತ್ತಲೇ, "ಅಪ್ಪಾ, ನನಗೆ ಮೇಷ್ಟ್ರು ಹೇಳೋದು, ಬರೆಯೋದು ಏನು ಗೊತ್ತಾಗಲ್ಲಪ್ಪ. ನಾನು ಸಾಲೆಗೆ...
ಮಹಾಶಿವರಾತ್ರಿ: ಅಂಧಕಾರದಿಂದ ಬೆಳಕಿನೆಡೆಗೆ ಸಾಗುವ ಅರಿವಿನ ಪಯಣ. ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಮಹಾಶಿವರಾತ್ರಿಗೆ ಅತ್ಯಂತ ವಿಶಿಷ್ಟವಾದ ಸ್ಥಾನವಿದೆ. ಇದು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ, ಬದಲಿಗೆ ಮನುಷ್ಯನ ಅಂತರಂಗದ ಅಂಧಕಾರವನ್ನು ದೂರಮಾಡಿ ಜ್ಞಾನದ ಜ್ಯೋತಿಯನ್ನು ಬೆಳಗುವ ಪರ್ವಕಾಲ. ಶಿವರಾತ್ರಿಯ ಉಗಮದ ಬಗ್ಗೆ ನಮಗೆ ಪುರಾಣಗಳಲ್ಲಿ ಪ್ರಮುಖವಾಗಿ ಎರಡು ಅದ್ಭುತ ಕಥೆಗಳು ಸಿಗುತ್ತವೆ. ಪುರಾಣಗಳ ಪ್ರಕಾರ, ಒಮ್ಮೆ ಸೃಷ್ಟಿಕರ್ತ ಬ್ರಹ್ಮ ಮತ್ತು ರಕ್ಷಕ ವಿಷ್ಣುವಿನ ನಡುವೆ "ಯಾರು ಶ್ರೇಷ್ಠ?" ಎಂಬ ಅಹಂಕಾರದ ಪೈಪೋಟಿ ಏರ್ಪಡುತ್ತದೆ. ಈ ವಿವಾದವು ವಿಶ್ವದ ಸಮತೋಲನಕ್ಕೆ ಧಕ್ಕೆ ತರುವ ಹಂತಕ್ಕೆ ತಲುಪಿದಾಗ, ಪರಶಿವನು ಮಧ್ಯ ಪ್ರವೇಶಿಸುತ್ತಾನೆ. ದೇವತೆಗಳ ಪ್ರಾರ್ಥನೆಯ ಮೇರೆಗೆ ಶಿವನು ಒಂದು ಬೃಹತ್ "ಅಗ್ನಿ ಸ್ತಂಭ" (ಜ್ಯೋತಿರ್ಲಿಂಗ) ರೂಪದಲ್ಲಿ ಅವರಿಬ್ಬರ ನಡುವೆ ಪ್ರಕಟವಾಗುತ್ತಾನೆ. ಈ ಸ್ತಂಭದ ಆದಿ (ಮೊದಲು) ಮತ್ತು ಅಂತ್ಯವನ್ನು (ಕೊನೆ) ಯಾರು ಮೊದಲು ಕಂಡುಹಿಡಿಯುತ್ತಾರೋ ಅವರೇ ಶ್ರೇಷ್ಠ ಎಂದು ಶಿವನು ಘೋಷಿಸುತ್ತಾನೆ. ವಿಷ್ಣುವು ವರಾಹ ರೂಪ ತಾಳಿ ಭೂಮಿಯ ಆಳಕ್ಕೆ ಹೋಗುತ್ತಾನೆ, ಬ್ರಹ್ಮನು ಹಂಸ ರೂಪದಲ್ಲಿ ಆಕಾಶಕ್ಕೆ ಹಾರುತ್ತಾನೆ. ಆದರೆ ಸಾವಿರಾರು ವರ್ಷಗಳ ಹುಡುಕಾಟದ ನಂತರವೂ ಇಬ್ಬರಿಗೂ ಅದರ ಗುರಿ ಸಿಗುವುದಿಲ್ಲ. ವಿಷ್ಣುವು ತನ್ನ ಸೋಲನ್ನು ಒಪ್ಪಿಕೊಂಡು ಶಿವನಿಗೆ ಶರಣಾಗುತ್ತಾನೆ. ಆದರೆ ಬ್ರಹ್ಮನು ಸುಳ್ಳ...